Wednesday, July 31, 2013

ಇಷ್ಟಲಿಂಗ


ಇಷ್ಟಲಿಂಗ

ಲಿಂಗಾಯತ ಧರ್ಮದ ವ್ಯೆಶಿಷ್ಟ್ಯ ಪೂರ್ಣ ಉಪಾಸನಾ ಸಾಧನ ಇಷ್ಟಲಿಂಗ. ನಿರಾಕಾರ ದೇವನನ್ನು ಮನುಷ್ಯರ, ಪ್ರಾಣಿಗಳ ಆಕಾರದಲ್ಲಿ ಕಲ್ಪಿಸದೆ ವಿಶ್ವದ ಆಕಾರದಲ್ಲಿ ರೂಪಿಸಿ, ಇಷ್ಟಲಿಂಗವನ್ನಾಗಿ ಕೊಟ್ಟವರು ಮಹಾಗುರು ಬಸವಣ್ಣನವರು, ಜಗತ್ತಿನ ಮತ್ತಾವ ಧರ್ಮಗಳಲ್ಲಿಯೂ ಇರದ ದೇವನನ್ನು ವಿಶ್ವದ ಆಕಾರದಲ್ಲಿ ತಾತ್ವಿಕವಾಕವಾಗಿ ರೂಪಿಸಿ ಪೂಜಿಸುವ ಪರಿಪೂರ್ಣತೆಯನ್ನ ಇಲ್ಲಿ ಕಾಣಬಹುದು. ನಿರಾಕಾರವನ್ನು ಸಾಕಾರ ಮೂಲಕ ಗ್ರಹಿಸಿಕೊಳ್ಳುವ ಪರಿಪಾಠ ಆಧ್ಯಾತ್ಮಿಕ, ವ್ಯೆವಹಾರಿಕ ಎರಡು ಪ್ರಪಂಚದಲ್ಲಿ ಉಂಟು, ನಿರಕಾರವಾದ ವೇಳೆಯನ್ನ ಅರಿಯಲಿಕ್ಕೆ ಸಾಕಾರವಾದ ಗಡಿಯಾರವು ಸಾಧನಗುವಂತೆ ನಿರಕಾರವಾದ ದೇವನನ್ನ ಅರಿಅಯಲಿಕ್ಕೆ ಇಷ್ಟಲಿಂಗವು ಸಾಕಾರ ಕುರುಹು. ಇದು ಯಾವುದೇ ಒಬ್ಬ ವ್ಯೆಕ್ತಿಯ ಮೂರ್ತಿಯಲ್ಲ, ಪ್ರಾಣಿಯ ಮೂರ್ತಿಯೂ ಅಲ್ಲ. ಗುಡಿಯಲ್ಲಿನ ಲಿಂಗದಂತೆ ಪೌರಾಣಿಕ ಶಿವನನ್ನು ಸಂಕೇತಿಸುವುದು ಅಲ್ಲ. ಜಗತ್ತನ್ನೆಲ್ಲ ತುಂಬಿಕೊಂಡಿರುವ ಪರಮಾತ್ಮನ ಶರಿರವವಾದ ಬ್ರಹ್ಮಾಂಡವು ಗೋಲಾಕಾರದಲ್ಲಿ ಇರುವದರಿಂದ ಆ ಆಕಾರದಲ್ಲಿ ರೂಪಿಸಿಕೊಂಡ ಕುರುಹು. ಇದಕ್ಕೆ ಸಾಮಾಜಿಕ, ಯೋಗಿಕ, ಆಧ್ಯಾತ್ಮಿಕ ಅರ್ಥವ್ಯಾಪ್ತಿ ಇದೇ. ಇದು ಮೇಲು-ಕೀಳು ಎಂಬ ಸೂತಕವನ್ನು ತೊಡೆದು ಹಾಕುವ ಸಾಧನ. ಬ್ರಾಹ್ಮಣನು ಲಿಂಗಧಾರಕನಾದರೆ ತಾನು ಮೇಲು ಎಂಬ ಮೇಲರಿಮೆಯನ್ನು, ಅಂತ್ಯಜನು ಲಿಂಗಧಾರಕನಾದರೆ ತಾನು ಕೀಳು ಎಂಬ ಕೀಳರಮಿಯನ್ನು ಬಿಟ್ಟು ಕೊಡಬೇಕಾಗುತ್ತದೆ. ಆಗ ಇಬ್ಬರಲಿಯೂ ಸಮಾನತೆ ಸ್ಥಾಪಿತವಾಗುತ್ತದೆ.

ಇಷ್ಟ ಲಿಂಗಕ್ಕೆ ಕಪ್ಪಾದ ಕಾಂತಿಯುಕ್ತವಾದ ಕಂಥೆಯ ಕವಚವು ಇರುವ ಕಾರಣ ಅದು ದೃಷ್ಟಿ ಯೋಗ ಅಥವಾ ತ್ರಟಕ ಯೋಗಕ್ಕೆ ಸಹಾಯಕ ಸಾಧನವಾಗುವುದು. ಆಲಿಯ ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು.ಆಧ್ಯಾತ್ಮಿಕವಾಗಿ ಇದು ಭಾವಸಾಗರವನ್ನು ದಾಂಟಿಸುವ ಹಡಗಿನಂತೆ. ಹಸುವಿನ ಕೆಚ್ಚಲಿನಲ್ಲಿರುವ ಹಾಲಿನಲ್ಲಿ ತುಪಾವಿರುವುದು ಸತ್ಯಾಂಶ. ಒಂದು ವೇಳೆ ಹಸುವು ಬಿದ್ದು ಪೆಟ್ಟದರೆ, ಬಿಸಿ ತುಪ್ಪವನ್ನ ಹಚ್ಚಿ ಆದ ಗಾಯ ಅಥವಾ ಪೆಟ್ಟನ್ನ ವಾಸಿ ಮಾಡುವುದು ಸರಿಯಾದುದು. ಆದರೆ "ಕೆಚ್ಚಲಿನಲ್ಲಿ ಹಾಲಿದೆ, ಹಾಲಿನಲ್ಲಿ ತುಪ್ಪವಿದೆ" ಎಂದು ಅತಿ ಬುದ್ದಿವಂತರಂತೆ(ಅಹಂ ಬ್ರಹ್ಮಾಸ್ಮಿ) ಕೂತರೆ ಹೇಗೆ ಹಸುವನ್ನ ಪೋಷಿಸಿ, ಕೆಚ್ಚಲಿಂದ ಹಾಲನ್ನ ಕರೆದು, ಹಾಲಿಗೆ ಸಂಸ್ಕಾರಕೊಟ್ಟು ತುಪ್ಪವ ಮಾಡಿ ಹಚ್ಚಿದರೆ ತಾನೇ ನೋವು ಮಾಯವಾಗುವುದು! ಅದೇ ರೀತಿ ಮಾನವನ ಒಳಗಿರುವ ಆತ್ಮ ಚೈತನ್ಯವು ಭವನ್ನ ಕಳೆಯಲಾರದು; ಇದನ್ನರಿತ ಶ್ರೀ ಗುರುವು ಅಂತರಂಗದ ಆತ್ಮ ಚೈತನ್ಯವನ್ನು ಚುಳಕಾಗಿ ಹೊರತೆಗೆದು ಹುಟ್ಟುಲಿಂಗವನ್ನಾಗಿ ರೂಪಿಸಿ, ಎರಡನ್ನು ಅಭಿನ್ನವಾಗಿ ಇಂಬಿಟ್ಟು ಶಿಷ್ಯನಿಗೆ ಧಾರಣ ಮಾಡುವನು. ಈ ಕರಸ್ತಲದ ಚ್ಯೋತಿ, ಅರುಹಿನ ಕುರುಹು ಮತ್ತೆ ಅಂತರಂಗವನ್ನು ಪ್ರವೇಶಿಸಿ ಕಾಯವನ್ನೇ ಕೈಲಾಸವನ್ನಾಗಿ ಮಾಡಿ ಪುನೀತಗೊಳಿಸುವುದು.

ಅಂತೆಯೇ ಷಣ್ಮುಖ ಸ್ವಾಮಿಗಳು 'ಇಷ್ಟಲಿಂಗವು ತನ್ನಿಂದ ಭಿನ್ನವಾದ ವಸ್ತುವಿನ ಮೂರ್ತಿಪೋಜೆಯಲ್ಲ ; ಜೀವಾತ್ಮ-ಪರಮಾತ್ಮರನ್ನ ಬೆಸುಗೆ ಮಾಡಿ ಪೂಜಿಸುವ ಅಹಂಗ್ರಹೋಪಾಸನೆ ' ಎಂದು ಹೇಳಿರುವರು.

ಎನ್ನ ಕರಸ್ಥಲದ ಮದ್ಯದಲ್ಲಿ ಪರಮ ನಿರಂಜನದ
ಕುರುಹು ತೋರಿದ, ಆ ಕುರುಹಿನ ಮಧ್ಯದಲ್ಲಿ
ಅರುಹಿನ ಕಳೆಯ ತೋರಿದ;
ಆ ಕಳೆಯ ಮಧ್ಯೆದಲ್ಲಿ ಮಹಾಜ್ಞಾನದ ಬೆಳಗ ತೋರಿದ
ಆ ಬೆಳಗಿನ ನಿಳುವಿನೊಳಗೆ ಎನ್ನ ತೋರಿದ
ಎನ್ನೋಳಗೇ ತನ್ನ ತೋರಿದ, ತನ್ನೊಳಗೆ ಎನ್ನ ನಿಂಬಿಟ್ಟು ಕೊಂಡ
ಮಹಾ ಗುರುವಿಗೆ ನಮೋ ನಮೋ ಎನುತಿರ್ಪೆ
ನಯ್ಯಾ ಅಖಂಡೇಶ್ವರಾ !

ಕೆಲವರು ಇಷ್ಟಲಿಂಗ ಪೂಜೆಯು ಸಹ ಸ್ಥಾವರಲಿಂಗ ಪೂಜೆ ಎನ್ನುವರು. ಆದ್ರೆ ಶರಣರು ತಮ್ಮ ವಚನಗಳಲ್ಲಿ ಈ ತಪ್ಪು ಹಾಗೂ ಕೆಟ್ಟ ಅಭಿಪ್ರಾಯವನ್ನ ಅಲ್ಲಗಳೆದಿದ್ದಾರೆ.

ಪರಬೊಮ್ಮವೆ ಶರಣನ ಶಿರದರಮನೆಯಿಂದ ಕರದರಮನೆಗೆ
ಗುರುಕೃಪೆಯಿಂದ ಲಿಂಗ ಮೂರ್ತಿಯಾಗಿ ಬಿಜಯಂ
ಗಯೇ ದೆರ್ಪುದು ಕಂಡಾ !
ಅದು ಕಾರಣ, ಶರಣಂಗೆಯೂ ಲಿಂಗಕ್ಕೆಯೂ ಭೇದಾ
ಭೇದ ಸಂಬಂಧವಿರ್ಪುದು ಕಂಡಾ !
ಈ ಗೊತ್ತನರಿಯದೆ ಯುಕ್ತಿಗೆಟ್ಟ ಮನುಜರು
ಲಿಂಗವು ಕೈಲಾಸದ ಶಿವನ ಕುರುಹಾದುದಾರಿಂದ ಪೂಜ್ಯ ವೆಂಬರು :
ಶರಣು ಮನುಜನಾದುದರಿಂದ ಅವನು ಪೂಜಕ ನೆಂಬರು
ಇಂತಿ ಕೇವಲ ಭೇದಸಂಬಂಧವ ಕಲ್ಪಿಸುವ ಭಾವಭಾರಿಗಳು
ಶಿವಾದ್ವೈತಕ್ಕೆ ದೂರವಗಿಪ್ಪರು ಕಂಡಾ :
ಅರೆಯರಿವಿನ ನರಜೀವಿಗಳು ಶರಣರ ಸಾಮರಸ್ಯಕೆ
ಹೊರಗಾಗಿರ್ಪರು ಕಂಡಾ.
ಕೂಡಲ ಚನ್ನ ಸಂಗಮದೇವಾ.

ಲಿಂಗವಂತರು ಧರಿಸಿ ಪೂಜಿಸುವ ಇಷ್ಟಲಿಂಗವು ಪೌರಾಣಿಕ ಶಿವನ ಪ್ರತಿಕವಲ್ಲ. ಶಿರದರಮನೆಯಲ್ಲಿ ನೆಲಸಿರುವ ಪರಬೋಮ್ಮದ ಪ್ರತೀಕ ಎನ್ನುವುದು ಶರಣರ ವಾಣಿ.

ಇಂತಹ ಅತ್ಯುನ್ನತವಾದ ತತ್ವವುಳ್ಳ ಇಷ್ಟಲಿಂಗವನ್ನು ಪ್ರತಿಯೊಬ್ಬ ಅನುಯಾಯಿಯೂ ಧರಿಸಲೇಬೆಕು. ಏಕೆಂದರೆ ದೇವನಿಗೆ ಎಡೆಮಾಡದೆ ಅವನು ಏನನ್ನು ತಿನ್ನಬಾರದು. ಜಗತ್ತೆಲವೂ ದ್ಯೆವಿವರ, ಅದನ್ನು ಉದಾರವಾಗಿ, ದಾನವಾಗಿ ದೇವರು ನಮಗೆ ಕೊಟ್ಟಾಗ ಅವನಿಗೆ ಕೃತಜ್ಞತೆ ಸಲ್ಲಿಸದೆ ಭೋಗಿಸುವುದು ಕೃತಘ್ನ ಕಾರ್ಯ. ಆದ್ದರಿಂದ ಪ್ರತಿಯೊಂದನ್ನು ನಾವು ಭೋಗಿಸುವ ಮುನ್ನವೇ ಅದನ್ನು ಸಾಂಕೇತಿಕವಾಗಿ ದೇವನಿಗೆ ಅರ್ಪಿಸಿ ಸ್ವೀಕರಿಸಬೇಕು. ಹೀಗೆ ಅರ್ಪಿಸುವ ಕಾರ್ಯವೇ ಪೂಜೆ ಇದರ ಅಂಗವಾಗಿ ನಿತ್ಯ ಲಿಂಗಾರ್ಚನೆಯನ್ನು ಮಾಡಿ, ದಿನದ ಮೊದಲ ಪ್ರಸದವಾಗಿ ಇಷ್ಟಲಿಂಗ ತೀರ್ಥ, ಇಷ್ಟಲಿಂಗ ಪ್ರಸಾದಗಳನ್ನು ಸ್ವೀಕರಿಸಿ ಜೀವನವನ್ನು ದಿವ್ಯಗೊಳಿಸಿಕೊಳ್ಳಬೆಕು.

ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೇ ?
ಹಿಂಗಲಾಗದು ಭಕ್ತಿ ಪಥಕ್ಕೆ ಸಲ್ಲದಾಗಿ !
ಹಿಂಗಲಾಗದು ಶಿವಶರಣರ ಪಥಕ್ಕೆ ಸಲ್ಲದಾಗಿ !
ಕೂಡಲಸಂಗಮ ದೇವರ ಹಿಂಗಿ ನುಂಗಿದುಗುಳು ಕಿಲ್ಪಿಷ?

ಇದನಾರಿತು ನಿತ್ಯ ಲಿಂಗಾರ್ಚನೆ ಮಾಡುವವನೇ ಲಿಂಗಾಯತನು ಸರ್ವರೂ ಲಿಂಗಾರ್ಚನೆಯನ್ನು ಮಾಡಬೇಕಾದರೆ ಅವರು ತಮ್ಮ ತಮ್ಮ ಇಷ್ಟಲಿಂಗಗಳನ್ನು ಧರಿಸಿಕೊಂಡಿರಲೇಬೇಕಷ್ಟೇ ? ಧರ್ಮಾಚರಣೆಗಳು ಶಿಥಿಲವಾದಾಗ ಜನರು ಲಿಂಗಧಾರಣೆಯ ಮಹತ್ವವನ್ನರಿಯದೆ ಧರಿಸುವುದುವುದನ್ನ ಬಿಟ್ಟು ಬಿಡುತ್ತಾರೆ. ಏನೋ ಅಂತಹ ಪ್ರಸಂಗ ಒದಗಿದಾಗ ಗಂಡ_ಹೆಂಡತಿ_ಮಕ್ಕಳು ಪರಸ್ಪರ ಎರವಲನ್ನ ಪಡೆದು ಕೇವಲ ಶಾಸ್ತ್ರಕ್ಕೆಂಬತೆ ಪೂಜಿಸುತ್ತಾರೆ. ಗುರು ಚಿತ್ಕಳೆ ತುಂಬಿಕೊಟ್ಟ ವಸ್ತುವನ್ನು ಶರೀರದಿಂದ ಅಗಲಿಸಿ ಬೇರೆ ಬೇರೆಯವರು ಹಾಗಿ ಪೂಜಿಸುಲಾಗದು ಅದನ್ನು ಚನ್ನಬಸವಣ್ಣ ನವರು ಟೀಕಿಸಿದ್ದಾರೆ.

ಸತಿಯ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ ;
ಸುತನ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ ;
ಅಳಸಿ ನಾಗವತ್ತಿಗೆಯಲಿರಿಸಿದುದು ಪ್ರಾಣಲಿಂಗವಲ್ಲ
ತನುಸೊಂಕಿ ವಜ್ರದಂತಿರಬೇಕು.
ಮನದಲ್ಲಿ ಕರದಲ್ಲಿ ಕೊಟ್ಟ ಪ್ರಾಣಲಿಂಗ ಹಿಂಗಿದಡೆ
ಅವನಂದೇ ವ್ರತಗೇಡಿ, ಕೂಡಲ ಚನ್ನ ಸಂಗಮದೇವಾ

ಗುರುವಿತ್ತ ಇಷ್ಟಲಿಂಗವನ್ನು ಅಗಲಿಸಿದರೆ ಅದರಲ್ಲಿನ ಚಿತ್ಕಳೆಯು ಪತನಗೊಳ್ಳುವುದು, ಗುರುಕಾರುಣ್ಯವು ಇಷ್ಟಲಿಂಗದಲ್ಲಿ ಹರಿದು ಸದಾಕಾಲದಲ್ಲಿ ಶಿಷ್ಯನನ್ನು ರಕ್ಷಿಸುವುದು. ಆದ ಕಾರಣ ಪ್ರತಿಯೊಬ್ಬರೂ ಅದನ್ನ ಧರಿಸಿ ಪೂಜಿಸಬೇಕು.

ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ ಕಿತ್ತಿ ಕಿತ್ತಿ
ಮತ್ತೆ ಬಿತ್ತುತ್ತಾ ಹೋದರೆ,
ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು
ಬೆಳೆಸನ್ನೀವ ಪರಿಯಂತೋ, ಮರುಳ ಮಾನವಾ!
ಗುರುವಿತ್ತ ಲಿಂಗವ ತೊರೆತೊರೆದು ಮರಳಿ
ಮರಳಿ ಧರಿಸಿದಡೆ ಆ ಇಷ್ಟಲಿಂಗವು ಅನಿಷ್ಟವ
ಕಳೆದು ಇಷ್ಟಾರ್ಥವನೀವ ಪರಿಯಿನ್ನೆಂತೋ
ಇದು ಕಾರಣ ಕೂಡಲ ಚೆನ್ನಸಂಗಯ್ಯನಲ್ಲಿ ಮುಕ್ತಿಯನರವೂಡೆ
ಅಂಗದಲ್ಲಿ ಹೆರೆಹಿಗಂದೆ ಲಿಂಗವ ಧರಿಸಬೇಕು.